ಉತ್ತರ ಭಾರತದಾಗ “ನಮ್ಮ ಮಂದಿ”

           
       ಇಲ್ಲೆ ನಮ್ಮ ಕನ್ನಡ ಮಂದಿ ಬೇಕಾದಷ್ಟು ಇದ್ದಾರ. ಕೆಲವೊಬ್ಬರು ನೌಕರಿ ಸಲುವಾಗಿ ಬಂದು ಇಲ್ಲಿ ಕಾಯಂ ನಿವಾಸಿಗಳಾಗಿ ಹೋಗ್ಯಾರ. ದಿಲ್ಲಿ ಒಳಗ ಚಂದಾಗಿ ಒಂದ ಕರ್ನಾಟಕ ಸಂಘ ಅದ. ಅಷ್ಟ ಅಲ್ಲದ ಬೇಕಾದಷ್ಟು ಕನ್ನಡ ಸಂಘ ಅವ, ರಾಯರ ಮಠ ಅದ. ಕನ್ನಡದವರು ನಡಸೋ ಸಾಲಿನೂ ಅವ. ಅದರ ಬಗ್ಗೆ ಇನ್ನೊಮ್ಮೆ ಹೇಳ್ತಿನಿ.


            ಹೊರಗ ಬಿದ್ದರ ಅಂಗಡ್ಯಾಗ, ಮಾಲ್‍ನಾಗ ಹಿಂಗ ಕನ್ನಡದವರು ಎಲ್ಲಾ ಕಡೆ ಸಿಗತಾರ. ನಾವ ಕನ್ನಡದಾಗ ಮಾತಾಡೋ ಮುಂದ ಹೊಳ್ಳಿ ಹೊಳ್ಳಿ ನೋಡಿದ್ರ ತಿಳಕೊಂಡ ಬಿಡೊದು ನಮ್ಮ ಮಂದಿ ಅಂತ.
 “ಕನ್ನಡದವರಾ?, ಎಲ್ಲಿಯವರು?” ಅಂತ ಕೇಳಿದ್ರ ಮೊದಲ “ಬ್ಯಾಂಗ್‍ಲೋರ್!!"  ಅಂತಾರ.  ನಾ ಅಂತೂ “ನಾ ಧಾರವಾಡದಕಿ” ಅಂತೆನಿ.
ಆಮೇಲೆ ನೋಡ್ರಿ “ಅಯ್ಯ ನಮ್ಮದು ಬಾಗಲಕೋಟಿರೀ!”, “ಅರೇ ನಮ್ಮದು ಅಲ್ಲೆ ಹಾವೇರಿ ರೀ!” ಅಂತ ಸುರು ಮಾಡತಾರ. ನಮ್ಮ ಊರು ನಮ್ಮದು ಹೇಳಲಿಕ್ಕೆ ಯಾಕ ಹಿಂದ ಮುಂದ ನೋಡುದು. 


            ಆಮೇಲೆ ಮತ್ತ ಯಾವಾಗರೆ ಸಿಕ್ಕಾಗ “ಹೆಂಗ ಇದ್ದಿರಿ... ಸೂಟಿಗೆ ಊರಿಗೆ ಹೋಗಿದ್ರಿ?” ಅಂತ ಅಗದಿ ಆತ್ಮಿಯತೆ ಇಂದ ಮಾತಾಡಸ್ತಾರ. ನೀವ ಎನ ಅನ್ರಿ ಪರ ಊರಾಗ ನಮ್ಮ ಮಂದಿ ಸಿಕ್ರ ಎಲ್ಲಿ ಇಲ್ಲದ ಅಕ್ಕರೆ ಉಕ್ಕಿ ಬರತದಲಾ.

No comments:

Post a Comment